ಶಂಕರನಾಗ್ರ ಹಳೆಯ ಚಿತ್ರದ ಶೀರ್ಷಿಕೆ, ಜೊತೆಗೆ ರಮೇಶ್ ನಿರ್ದೇಶನ ಕಮ್ ಅಭಿನಯದ ಚಿತ್ರ ಹಾಗು ಸಿನೆಮಾದ ಕುರಿತು ಕೇಳಿ ಬರುತ್ತಿದ್ದ ಮೆಚ್ಚುಗೆಯ ಮಾತುಗಳ ಹಿನ್ನೆಲೆಯಲ್ಲಿ ಅಪಾರ ನಿರೀಕ್ಷೆ ಇಟ್ಟುಕೊಂಡು ನೋಡಲು ಹೊರಟ ಚಿತ್ರವೇ.. ಆಕ್ಸಿಡೆಂಟ್. ಚಿತ್ರ ನೋಡಿ ಹೊರಬಂದ ಮೇಲೆ ಭರವಸೆ ಹುಸಿಯಾಗಲಿಲ್ಲ ಎಂಬ ಸಮಾಧಾನ; ಒಂದು ವಿಭಿನ್ನ ಚಿತ್ರವನ್ನು ನೋಡಿ ಆನಂದಿಸಿದ ಖುಷಿ. ಮಾಮೂಲಿ ಸಿದ್ಧಸೂತ್ರಗಳಿಂದ ತುಂಬಿರುವ ಮಸಾಲ ಚಿತ್ರಗಳಂತಿರದೆ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡಿದ್ದಕ್ಕಾಗಿ ರಮೇಶ್ ಅವರನ್ನು ಶ್ಲಾಘಿಸಬೇಕು.. ಅಭಿನಂದಿಸಬೇಕು.
ಚಿತ್ರದ ಕಥೆಯತ್ತ ಬಂದ್ರೆ…ಹೀರೋ ಸಾವಂತ್(ರಮೇಶ್) ಒಬ್ಬ ರೇಡಿಯೋ ಜಾಕಿ. ಹೆಂಡತಿ ಅಂದ್ರೆ ಪಂಚಪ್ರಾಣ. ಅವನ ಪತ್ನಿಪ್ರೀತಿ ಕಂಡು ಅವನೊಂದಿಗೆ ವಿದೇಶಯಾತ್ರೆಗೆ ತೆರಳಿದ್ದ ಕಲೀಗ್ (ಪೂಜಾ ಗಾಂಧಿ) ಅಸೂಯೆಯಿಂದ ಅವನ ಕಾಲೆಳಿತಾ ಇರ್ತಾಳೆ. ಅವರು ಬೆಂಗಳೂರು ಮುಟ್ಟುವಷ್ಟರಲ್ಲಿ ಅವನ ಪತ್ನಿ ವಸುಂಧರ (ರೇಖಾ) ಆಕ್ಸಿಡೆಂಟ್ನಲ್ಲಿ ಇಲ್ಲವಾಗುತ್ತಾಳೆ. ಅವಳ ಸಾವಿನ ಸುತ್ತ ಅನುಮಾನಗಳ ಪೊದರು. ಶಿಕ್ಷಕಿಯಾಗಿದ್ದು ಸಮಾಜದ ಅನ್ಯಾಯದ ವಿರುದ್ಧ ಸೊಲ್ಲೆತ್ತಿ ಹೋರಾಡುವ ದಿಟ್ಟೆ ವಸು ಈ ಹೋರಾಟದಿಂದಾಗಿ ಯಾರ್ಯಾರದೋ ವಿರೋಧ ಕಟ್ಟಿಕೊಂಡಿರೋದ್ರಿಂದ ಇದು ಖಂಡಿತಾ ಅ ಆಕ್ಸಿಡೆಂಟ್ ಅಲ್ಲ ಕೊಲೆ ಅಂತ ಅನ್ನಿಸೊಕೆ ಶುರುವಾಗುತ್ತೆ. ಈ ಜಾಡನ್ನು ಹಿಡಿದು ಹೊರಡುವ ನಾಯಕನ ಸತ್ಯ ಶೋಧನೆಯ ಹಾದಿಯ ಸುತ್ತ ಹೆಣೆದ…ಕ್ಷಣ ಕ್ಷಣಕ್ಕೂ ರೋಚಕ ತಿರುವುಗಳನ್ನು ಪಡೆಯುತ್ತಾ ಸಾಗುವ ಚಿತ್ರದ ಕಥೆ ನಿಜಕ್ಕೂ ಥ್ರಿಲ್ಲಿಂಗ್. ಪ್ರಥಮಾರ್ಧದ ತುಂಬೆಲ್ಲಾ ಪ್ರತೀ ದೃಶ್ಯದಿಂದ ದೃಶ್ಯಕ್ಕೆ ಕುತೂಹಲ ಮೂಡಿಸುತ್ತಾ ಸಾಗುವ ಚಿತ್ರದಲ್ಲಿ ಅಲ್ಲಲ್ಲಿ ನಾಯಕನ ನೆನಪಿನಾಳದಲ್ಲಿ ಮೂಡಿ ಮರೆಯಾಗುವ ನಾಯಕಿಯೊಂದಿಗಿನ ಕ್ಷಣಗಳ ಮೆಲುಕು. ಸಿಕ್ಕಿದ ಸುಳಿವುಗಳ ಒಳಸುಳಿಗಳ ಆಳಕ್ಕಿಳಿದು ನಾಯಕಿಯ ಸಾವಿಗೆ ಕಾರಣ ಹುಡುಕುವ ನಾಯಕನ ಹುಡುಕಾಟವೇ ಆಕ್ಸಿಡೆಂಟ್. ಈ ಹುಡುಕಾಟದಲ್ಲಿ ನಾಯಕ ಯಶಸ್ವಿಯಾಗ್ತಾನಾ? ಅದು ಕೊಲೆಯೋ ಅಥವಾ ಆಕ್ಸಿಡೆಂಟೋ? ಆಕೆಯ ನಿಗೂಡ ಸಾವಿಗೆ ಕಾರಣ ಏನು…ಇದನ್ನೆಲ್ಲಾ ಈಗಲೇ ಹೇಳಿ ಬಿಟ್ರೆ ಏನು ಸ್ವಾರಸ್ಯವಿದೆ ಅಲ್ವೆ?
ಮಧ್ಯಂತರದವರೆಗೆ ಚಿತ್ರದ ನಿರೂಪಣೆಯಲ್ಲಿ ಎಲ್ಲೂ ಬಿಗುವನ್ನು ಬಿಟ್ಟುಕೊಡದ ರಮೇಶ್ ದ್ವಿತೀಯಾರ್ಧದಲ್ಲಿ ಸ್ವಲ ಹಿಡಿತ ಸಡಿಲಿಸಿದಂತೆ ಭಾಸವಾದರೂ ಕೂಡಾ, ಚಿತ್ರದ ಆಶಯಕ್ಕೆ ಇದರಿಂದ ಒಂದಿನಿತೂ ಧಕ್ಕೆಯಾಗಿಲ್ಲ ಅನ್ನೋದು ನಿಜ. ಹಾಗಂತ ಚಿತ್ರದ ಬಗ್ಗೆ ಒಂದೂ ದೂರು ಇಲ್ಲ ಅಂತ ತಿಳಿಬೇಡಿ. ಮೊತ್ತ ಮೊದಲನೆಯದು ಚಿತ್ರದ ಹಾಡುಗಳ ಕುರಿತು. ಇರುವ ಹಾಡುಗಳಲ್ಲಿ ಮನಸ್ಸಿನಲ್ಲುಳಿಯುವುದು ಸೋನು ನಿಗಮ್ ಹಾಡಿರುವ ಬಿ.ಆರ್.ಲಕ್ಷ್ಮಣರಾವ್ ಬರೆದಿರುವ ‘ಬಾ ಮಳೆಯೆ ಬಾ..’ ಹಾಡು ಮಾತ್ರ. ಉಳಿದಂತೆ ಜಿಗಿದು ಬಂತು ಪರವಾಗಿಲ್ಲ. ಮಿಕ್ಕೆಲ್ಲ ಹಾಡುಗಳು ಅಷ್ಟಾಗಿ ಮನ ಸೆಳೆಯುವಲ್ಲಿ ವಿಫಲವಾಗಿವೆ. ಜೊತೆಗೆ ಹಾಡಿನ ಅಬ್ಬರ ಮತ್ತು ಕಿವಿಯ ಮೇಲೆ ಅಪ್ಪಳಿಸುವ ಡ್ರಮ್ಬೀಟ್ಸ್ನಿಂದಾಗಿ ಸ್ವಲ್ಪ ಹಾರ್ಷ್ ಅನ್ನಿಸಿ ಹಾಡಿನ ಸಾಹಿತ್ಯವೇ ಮಸುಕಾಗಿತ್ತು. ಜೊತೆಗೆ ಇಂತಹಾ ಕಥಾಹಂದರದ ಚಿತ್ರಕ್ಕೆ ಈ ಹಾಡುಗಳನ್ನು ತುರುಕುವ ಔಚಿತ್ಯ ಕೂಡಾ ಪ್ರಶ್ನಾರ್ಹ.
ಇನ್ನು ಪಾತ್ರಗಳ ಕುರಿತು ಹೇಳಬೇಕೆಂದರೆ ದತ್ತಣ್ಣನ ಪಾತ್ರ ಚಿತ್ರಕ್ಕೆ ಯಾವ ರೀತಿ ಅಗತ್ಯವಾಗಿತ್ತು ಅನ್ನೋದನ್ನು ಚಿತ್ರ ನೋಡಿ ನೀವೇ ನಿರ್ಧರಿಸಿ. ಅಂತೆಯೇ ಪೂಜ ಗಾಂಧಿ ಎಂಬ ಗ್ಲಾಮರ್ ಬೊಂಬೆಯ ಪಾತ್ರ. ರಮೇಶ್ ಜೊತೆ ರೇಡಿಯೋ ಜಾಕಿಯಾಗಿರೋ ಪೂಜಾ, ದಾಂಡಿಯಾ ನೃತ್ಯವೊಂದರಲ್ಲಿ ಪ್ರೇಕ್ಷಕರ ಕಣ್ಣುಕುಕ್ಕುವುದಕ್ಕಷ್ಟೇ ಸೀಮಿತವಾಗಿಬಿಟ್ಟಿದ್ದಾರೆ.
ಇನ್ನು ರಮೇಶ್ ವಿಷಯಕ್ಕೆ ಬಂದ್ರೆ..ನಿರ್ದೇಶನ ಹಾಗು ಅಭಿನಯ ಎರಡರಲ್ಲೂ ಪೂರ್ಣಾಂಕದ ಜೊತೆಗೆ ಬೋನಸ್ ಅಂಕ ಕೊಟ್ರೂ ತಪ್ಪಿಲ್ಲ. ಇಡೀ ಚಿತ್ರಕ್ಕೆ-ಚಿತ್ರಕಥೆಗೆ ರಮೇಶ್ ಜೀವಾಳ. ರೇಖಾ ಚಿತ್ರದ ಆರಂಭಕ್ಕೇ ಇಲ್ಲವಾಗುವುದರಿಂದ ಆಮೇಲೆ ರಮೆಶ್ ನೆನಪಿಸಿಕೊಳ್ಳುವ ದೃಶ್ಯ ಹಾಗು ಹಾಡುಗಳಲ್ಲಷ್ಟೇ ಮಿಂಚುತ್ತಾರೆ. ನಾಟಕರಂಗದ ದೈತ್ಯ ಪ್ರತಿಭೆ ರಾಜೇಂದ್ರ ಕಾರಂತ್ ತಮ್ಮ ವಿಶಿಷ್ಟ ಮ್ಯಾನರಿಸಂನಿಂದಾಗಿ ಗಮನ ಸೆಳೇಯುತ್ತಾರೆ. ತಮ್ಮ ಡೈಲಾಗ್ಗಳಿಂದ ಬಿಗಿಯಾಗಿರುವ ಮುಖದಲ್ಲಿ ಮೆಲುನಗು ಅರಳಿಸುತ್ತಾರೆ. ಮಿಕ್ಕಂತೆ ಸುಧಾರಾಣಿ ಚಿಕ್ಕರೋಲ್ನಲ್ಲಿ ಚೊಕ್ಕದಾಗಿ ಅಬಿನಯಿಸಿದ್ದಾರೆ. ಮೋಹನ್, ವಿಶಾಲ್, ದಿನೇಶ್ಬಾಬು ಕೂಡಾ ಸಹಜವಾಗಿ ಅಭಿನಯಿಸಿದ್ದಾರೆ. ಜೊತೆಗೆ ಅನೇಕ ಹೊಸ-ಹಳೇ ಮುಖಗಳು ಕಾಣಿಸಿಕೊಂಡರೂ ಕೂಡಾ, ಚಿತ್ರದ ವಸ್ತುವಿನಿಂದಾಗಿ ಯಾವ ಪಾತ್ರಕ್ಕೂ ಅಷ್ಟೇನು ಸ್ಕೋಪ್ ಇರಲಿಲ್ಲವಾದ್ದರಿಂದ ಅಷ್ಟಾಗಿ ಮಿಂಚಲು ಯಾರಿಗೂ ಅವಕಾಶವಿಲ್ಲ. ಆದ್ರೂ ಅಭಿನಯದ ವಿಷಯದಲ್ಲಿ ಯಾರೂ ಪಾತ್ರಕ್ಕೆ ಮೋಸ ಮಾಡಿಲ್ಲ.(ದತ್ತಣ್ಣ ಅವರ ವಿಷಯದಲ್ಲಿ ಪಾತ್ರವೇ ಅವರ ಅಭಿನಯ ಪ್ರತಿಭೆಗೆ ಮೋಸ ಮಾಡಿತು ಅಂದ್ರೂ ತಪ್ಪಿಲ್ಲ)
ಒಟ್ಟಾರೆಯಾಗಿ ಹೇಳಬೇಕೆಂದ್ರೆ ವಿಶಿಷ್ಟ ಪ್ರೊಡಕ್ಷನ್ನವರು ಕನ್ನಡಕ್ಕೆ ಅಪರೂಪವೆನ್ನಿಸುವ ಒಂದು ಉತ್ತಮ, ವಿಭಿನ್ನ ಚಿತ್ರವನ್ನು ನಮ್ಮ ಮುಂದೆ ಇರಿಸಿದ್ದಾರೆ. ಸಧ್ಯದ ಟ್ರೆಂಡ್ ಆದ ಹದಿಹರೆಯದ ಪ್ರೀತಿ, ರೌಡಿಸಂ ನೆರಳಲ್ಲಿ ಅರಳುವ ಪ್ರೀತಿ ಇವುಗಳಿಗಿಂತ ಭಿನ್ನವಾಗುಳಿವ ಅಪರೂಪದ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ನೀಡಿದ್ದಾರೆ. ಈ ಪ್ರಯತ್ನದಲ್ಲಿ ಸಾಕಷ್ಟು ಯಶಸ್ಸು ಕೂಡಾ ಕಂಡಿದ್ದಾರೆ. ಆ ಪ್ರಯತ್ನವನ್ನು ಮೆಚ್ಚಿ ಪ್ರೋತ್ಸಾಹಿಸಲು, ಸವಿದು ಆನಂದಿಸಲು ಮನೆಮಂದಿಯೆಲ್ಲಾ ಒಮ್ಮೆ ನೋಡ ಬಹುದಾದ ಅತ್ಯುತ್ತಮ ಚಿತ್ರ ಆಕ್ಸಿಡೆಂಟ್. ಬರೇ ಪ್ರಚಾರ ಗಿಮಿಕ್ಗಳಿಂದಲೇ ಚಿತ್ರಕ್ಕೆ ಜನರನ್ನು ಸೆಳೆಯುವ ಮಂದಿಯ ನಡುವೆ, ರಮೇಶ್ ನಿಜಕ್ಕೂ ಒಂದು ಉತ್ತಮ ಚಿತ್ರ ನೀಡಿ ಅದಕ್ಕೆ ಭರ್ಜರಿ ಪ್ರಚಾರ ಮಾಡಿದ್ದಾರೆ. ಈ ಪ್ರಚಾರ ಪ್ರಯತ್ನ ಖಂಡಿತವಾಗಿಯೂ ಹುಸಿಹೋಗೋಲ್ಲ ಅನ್ನೋದು ಚಿತ್ರ ನೋಡಿದ ಎಲ್ಲರ ಅನಿಸಿಕೆ ಮತ್ತು ಆಶಯ.

chitra vimarshe nodi omme chitra noda beku anniside… ondu aLuku andre maneyarella nodlikke ’suspense’ chitra parvagillava anta.
ನೀವು ಹೇಳಿದಂತೆ ಆಕ್ಸಿಡೆಂಟ್ ಚಿತ್ರ ಕನ್ನಡ ಚಿತ್ರರಂಗದಲ್ಲಿ ಒಂದು ವಿನೂತನ ಪ್ರಯತ್ನ. ಆ ಪ್ರಯೋಗದಲ್ಲಿ ರಮೇಶ್ ಯಶಸ್ವಿ ಆಗಿದ್ದಾರೆ ಕೂಡಾ. ಚಿತ್ರ ನೋಡಿ ಬಂದಿದ್ದೇನೆ. ನನಗನ್ನಿಸಿದ್ದನ್ನ ನೀವೇ ಬರೆದಿದ್ದರಿಂದ ನಾನು ಬರೆಯುವ ಗೋಜಿಗೆ ಹೋಗುವುದಿಲ್ಲ.
ನಿಮ್ಮ ಚಿತ್ರವಿಮರ್ಶೆಗಳು ಉತ್ತಮ ಚಿತ್ರಗಳಿಗೆ ಮತ್ತೊಂದಿಷ್ಟು ಬರಲೆಂದು ಹರಸುವ
ಗಣೇಶ್.ಕೆ
preetiya vijar raj avare…….
neevu barediddu vimarsheno athava nimma anisikeno?…ishtondu adbhutavaagi bardiddiralla ashtondu chennagideya cinima?…… illiruva (?) + point maatra ullekisiddirallla…illiruva kelavu vaifalyagala kadegu neevu gamana harisabekittu allave?……
yaava arthadalli idakke suspence cinima antha helteeri? anavashyakaavaagi haadugalanna tutukalaagide….suspence cinima antaare..adare konevargu suspance annodanna bootagannadinalli hudukabeku…..suspance cinimada villan jaggesh filmanllidda comidian tara aadtaane…tanikeya baradalli aaguvanthaha kolegalige lekka ne illa…….br lakshmana rao avara adbhuta haadanna summane turukalaagide…..aa haadigu matte aa sanniveshakku yaavude sambandave illa,……..
anda haage chitrakatheyalli yaavude hosatana illa…innu kathe na hudukoke agalla…hogli cinimagintha nimma vimarshe(?) ne sakattagide;)