‘ದಂಗೆಯ ದಿನಗಳು’ ಓದಿದ್ರಾ?

27 04 2008

ಇತಿಹಾಸವೆಂದರೆ ನಮ್ಮ ಪಾಲಿಗೆ ಬರೀ ರಾಜರುಗಳು ಸತ್ತ, ಹುಟ್ಟಿದ ಇಸವಿಗಳನ್ನು, ಯುದ್ಧ ನಡೆದ ದಿನಾಂಕಗಳನ್ನು ಬಾಯಿಪಾಠ ಮಾಡುವ ನೀರಸ ಪ್ರಕ್ರಿಯೆ. ಶಾಲಾ ಕಾಲೇಜುಗಳ ಪಠ್ಯಗಳಲ್ಲಿ ಓದಿರುವುದು - ಉರು ಹೊಡೆದು ಪರೀಕ್ಷೆಗಳಲ್ಲಿ ಕಾರಿಕೊಂಡಿದ್ದೂ ಇದನ್ನೇ. ಆದರೆ ಇತಿಹಾಸವೆಂದರೆ ಬರೀ ಇಷ್ಟೇ ಅಲ್ಲ. ಸ್ವಾರಸ್ಯಕರವಾಗಿ, ಯಥಾವತ್ತಾಗಿ ಘಟನೆಗಳನ್ನು ಮಂಡಿಸಿದರೆ ಓದುವವರ ಪಾಲಿಗೆ ರಸಗವಳವಾಗಬಲ್ಲುದು ಅಂತ ರವಿ ಬೆಳಗೆರೆ ನಿರೂಪಿಸಿದ್ದಾರೆ. ಮನೋಹರ್ ಮಳಗಾಂವಕರ್ ಕೃತಿಯನ್ನು ಸೊಗಸಾಗಿ ಅನುವಾದಿಸಿ, ತಮ್ಮದೇ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿ ದಂಗೆಯ ದಿನಗಳು ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.

 

ನಾನಾ ಸಾಹೇಬನ ನಿರೂಪಣೆಯ ಮಾತಿನಲ್ಲಿ ೧೮೫೭ರ ಮಹಾದಂಗೆಯ ಕಾಲದ ಘಟನೆಗಳನ್ನು, ಆವತ್ತಿನ ಕ್ಷೋಭೆ, ತಳಮಳ, ವಿದ್ರೋಹ, ಬ್ರಿಟೀಷರ ಅನಾಚಾರ ಇವನ್ನೆಲ್ಲಾ ಎಳೆಎಳೆಯಾಗಿ ಬಿಚ್ಚಿಡುತ್ತಾ ಸಾಗುತ್ತದೆ ಈ ಕೃತಿ. ಎರಡನೆ ಬಾಜೀರಾಯ, ಅವನ ದತ್ತು ಮಗ ನಾನಾ ಸಾಹೇಬ, ತಾಂತ್ಯಾ ಭಟ್ಟ, ಅಜೀಮ, ಚಂಪಾ, ಅಜೀಜಾನ್, ಜಯಾಜಿ ಸಿಂಧಿಯಾ, ಬೇಗಮ್ ಹಜರತ್ ಮಹಲ್, ವೀಲರ್, ಎಲೀಜಾ, ಮೈಕೆಲ್ ಪಾಮರ್.. ಹೀಗೆ ಆ ದಿನಗಳು ಪಾತ್ರಗಳ ರೂಪದಲ್ಲಿ ಒಂದೊಂದಾಗಿ ನಿಮ್ಮ ಕಣ್ಮುಂದೆ ಸುಳಿದಾಡುತ್ತವೆ. ಒಮ್ಮೆ ಕೈಗೆತ್ತಿಕೊಂಡರೆ ಕೆಳಗಿಡಲು ಮನಸ್ಸೇ ಬಾರದಿರುವಷ್ಟು … ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿಬಿಡುವಷ್ಟು ಸೊಗಸಾಗಿ ಬಂದಿದೆ ದಂಗೆಯ ದಿನಗಳು. ದೇಶಪ್ರೇಮದ ಕುರಿತು, ಇತಿಹಾಸದ ಕುರಿತು ಬರೆಯುವಾಗ ಬೆಳಗೆರೆ ಲೇಖನಿಯಲ್ಲಿ ಮೂಡುವ ಒಂದು ಅದ್ಭುತ ಶೈಲಿ ಪುಸ್ತಕಕ್ಕೆ ಇನ್ನಷ್ಟು ಮೆರುಗು ತಂದಿದೆ.

 

ದಂಗೆಯ ದಿನಗಳನ್ನು ಪ್ರತ್ಯಕ್ಷ ಕಂಡಂತಹ ಅನುಭವದ ಜೊತೆಗೆ, ಅನಾಚಾರಗಳಿಗೆ ಬಲಿಯಾದ ಮುಗ್ಧ-ನಿಷ್ಪಾಪಿಗಳ ಆಕ್ರಂಧನ ಕೇಳಿ ಕಣ್ಣು ಹನಿಗೂಡುತ್ತದೆ; ಕರುಳು ಕತ್ತರಿಸಿದಂತಾಗುತ್ತದೆ. ಮರೆತೇ ಹೋದಂತಾಗಿದ್ದ ಇತಿಹಾಸದ ಮಹಾನ್ ಘಟನೆಯೊಂದನ್ನು ನೆನಪಿಸಿಕೊಟ್ಟು, ದಂಗೆಯ ಸಂದರ್ಭದ ಎಷ್ಟೋ ಅರಿವಿಲ್ಲದ ಸಂಗತಿಗಳು, ಪೇಶ್ವೆಗಳು, ನಾನಾ ಸಾಹೇಬನ ಬದುಕಿನ ಸುತ್ತಮುತ್ತಲಿನ ನಾನಾ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಮನಸ್ಸಿಗೆ ಮುಟ್ಟುವಂತೆ ತಿಳಿಸುತ್ತಾ ಹೋಗುತ್ತದೆ.

 

ಈ ಬೇಸಗೆಯ ಬಿಸಿಯೊಳಗೆ ದಂಗೆಯ ದಿನಗಳ ಕಾವು ನಿಮ್ಮನ್ನು ತಟ್ಟಲಿ. ಆ ಮೂಲಕ ದಂಗೆಯಲ್ಲಿ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಭಾಗಿಯಾದ ಎಲ್ಲಾ ಧೀರ ಚೇತನಗಳ ನೆನಪಾಗಿ ನಮ್ಮ-ನಿಮ್ಮ ಕಣ್ಣಿಂದ ಒಂದು ತೊಟ್ಟು ಜಾರಿದರೆ.. ಅದೇ ನಾವು-ನೀವು ಸಲ್ಲಿಸಬಹುದಾದ ಮಹಾನ್ ಗೌರವ.


ಮೂಲ                                 :         ಮನೋಹರ್ ಮಳಗಾಂವಕರ್

ಕನ್ನಡಕ್ಕೆ                               :         ರವಿ ಬೆಳಗೆರೆ

ಪುಟಗಳು                             :         ೨೯೮ + ೬

ಬೆಲೆ                                   :         ೧೫೦

ಪ್ರಕಾಶನ                             :         ಭಾವನ ಪ್ರಕಾಶನ

 

 

 


Actions

Information

3 responses

7 01 2009
prashant M shirol

Namaskara
I have few doubts about Dangeya Dinagalu. I read it. and its very nice one. It holds the nerves. I enjoyed it very much,
Is it the autobiography of Nana saheb?
or its a imagined story by manohar malaganvkar?
The story is like Nana saheb himself has written it.
i am totally confused. is it a imagined fiction or the true one?
if true one how come malaganvakara came to know abt it, so accurately?
plz clarify my doubts.
thanku

11 05 2009
jithendra .gr

dear sir i read , i got real war experiance my question is after nana saheb reached soudi whats next .?

11 05 2009
jithendra .gr

The story is like Nana saheb himself has written it.
i am totally confused. is it a imagined fiction or the true one?
if true one how come malaganvakara came to know abt it, so accurately?
plz clarify my doubts.

or its imagination story….?

Leave a comment