ನೀವೆಲ್ಲ ಬುದ್ಧಿವಂತರು ಅಂತ ನಂಗೂ ಗೊತ್ತಿದೆ. ಆದ್ರೂ ಇಲ್ಲಿ ನಿಮಗೆ ಕೆಲವು ತರ್ಲೆ/ದಡ್ಡ ಪ್ರಶ್ನೆಗಲಿವೆ. ಈ ಪ್ರಶ್ನೆಗಳನ್ನು ನೀವು ಅಲ್ಲಿ-ಇಲ್ಲಿ ಕೇಳಿರಬಹುದು. ಕೇಳದೆ ಇರೋರಿಗಾಗಿ ಇಲ್ಲಿ ಕೆಲವು ಪ್ರಶ್ನೆಗಳು…ಉತ್ರ ಗೊತ್ತಿದ್ರೆ ಹೇಳಿ
೧. ಜವಾಹರ್ಲಾಲ್ ನೆಹರು ಇಂದಿರಾಗಾಂಧಿಯ ತಂದೆಯ _________
೨. ಬಸ್ಸ್ಟ್ಯಾಂಡ್ನಲ್ಲಿ ಬಸ್ಸು ಯಾಕೆ ನಿಲ್ಲುತ್ತೆ?
೩. ಸೆನೆಂಟೀ ಸೆವೆನ್ ಕಾಫಿನ ಹದಿನಾಲ್ಕು ಜನ ಸಮನಾಗಿ ಹಂಚಿ ಕುಡಿದ್ರೆ ಒಬ್ಬ್ರೊಬ್ರು ಎಷ್ಟು ಲೋಟ ಕುಡಿದ ಹಾಗಾಯ್ತು?
೪. ಕಲ್ಲು ನೀರಲ್ಲಿ ಯಾಕೆ ಮುಳುಗುತ್ತೆ?
೫. ಬೆಂಗಳೂರಿಂದ ಮಂಗಳೂರಿಗೆ ಹೋಗುವ ಒಂದು ಎಲೆಕ್ಟ್ರಿಕ್ ರೈಲು ಸಧ್ಯ ಪೂರ್ವದಿಂದ ಪಸ್ಚಿಮಕ್ಕೆ ಹೊಗ್ತಾ ಇದೆ. ಆಗ ಜೋರಾಗಿ ಉತ್ತರದಿಕ್ಕಿಂದ ದಕ್ಷಿಣ ದಿಕ್ಕಿಗೆ ಗಾಳಿ ಬೀಸ್ತಾ ಇದೆ. ರೈಲಿನ ಹೊಗೆ ಯಾವ ದಿಕ್ಕಿಗೆ ಹೋಗುತ್ತೆ?
೬. ನಾನ್ನೂರರಿಂದ ನೂರನ್ನು ತೆಗೆದ್ರೆ ಉಳಿಯೋದೆಷ್ಟು?
೭. (1೦೦-೦) x ( 99-1) x (98-2) x (97-3) x…………….. x (3-97) x (2-98) x (1-99) x (೦-1೦೦) = ? ಬೇಗ ಹೇಳಿ.
೮. ೪ಸೆಂ.ಮಿ ಉದ್ದ ಹಾಗೂ ೪ಸೆಂ.ಮಿ ಅಗಲ ಇರೋ ಒಂದು ಕಿಂದಿಯೊಳಗಿಂದ ೪.೫ ಸೆಂ.ಮಿ ವ್ಯಾಸವಿರೊ(ಇಂಗ್ಲಿಷ್ ಗೊತ್ತಿಲ್ಲದವರು ಇದನ್ನು ಕನ್ನಡದ ಡಯಾಮೀಟರ್ ಅಂತ ಓದಿಕೊಳ್ಳಿ!) ನಾಣ್ಯವನ್ನು ತೂರಿಸ್ಬೇಕು. ಇದು ಸಾಧ್ಯಾನೇ?
೯. ಗಂಡ ಹೆಂಡತಿ ಇಬ್ರು, ೩ ಜನ ಮಕ್ಕಳು. ಒಟ್ಟು ೭ ರೊಟ್ಟಿ ಇದೆ. ರೊಟ್ಟಿಯನ್ನು ಹರಿಯದೆ ಸಮನಾಗಿ ಹಂಚಬೇಕು. ಪ್ರಯತ್ನ ಮಾಡಿ
ಉತ್ರ ನಿಮಗೆಲ್ಲರಿಗೂ ಗೊತ್ತಿರೋದ್ರಿಂದ ಉತ್ತರ ಕೊಡ್ತಾ ಇಲ್ಲ. ಬಹುತೇಕ ನೀವೆಲ್ಲರೂ ಕೇಳಿದ ಪ್ರಶ್ನೆಗಳೇ ಇವು. ಆದ್ರೂ ಉತ್ರ ಬೇಕು ಅಂದ್ರೆ ಮುಂದಿನ ವಾರ ಕೊಡ್ತೀನಿ ಬಿಡಿ.

good questions, for some I know answer and for some I dont know answer.