ಮನದಲಿ ಜಿನುಗಿದ ಹನಿ ಹನಿಗಳು ಸೇರಿ ಭಾವ ಸಿಂಧುವಾಗಿದೆ…
ಹೆಜ್ಜೆ ಗುರುತು
ಮಳೆಗಾಲದೊಂದು ತಣ್ಣನೆಯ ರಾತ್ರಿಯಲಿ,
ಕಪೋಲ ಚುಂಬಿಸುವ ನಿನ್ನ ನೆನಪಿನಶ್ರು ಧಾರೆಯಲಿ,
ಒದ್ದೆಯಾದ ಮನದ ಅಂಗಳದ ತುಂಬೆಲ್ಲಾ,
ನೀ ನಲಿದು ಹೋದ ಹೆಜ್ಜೆಯದೇ ಗುರುತು
ಜಾಣ ಕಿವುಡು
ಹೃದಯದ ಪಿಸುಮಾತುಗಳಿಗೂ ಸ್ಪಂದಿಸಿ
ಕಿವಿಯಾದವಳೇ ಕೇಳು
ಈಗ ಕೂಗಿ ಕರೆದರೂ ಕೇಳೋಲ್ಲಾ ಅಂದ್ರೆ
ನಂಬೋದು ಹ್ಯಾಗೆ ಹೇಳು?
ಗಾಯ
ಕಣ್ಣಂಚಿನ ತೇವ ಆರಿ ಹೋದೀತು
ಇಂದಲ್ಲಾ ನಾಳೆ…
ಎದೆಯೊಳಗಿನ ಗಾಯಕ್ಕೆ
ಮದ್ದು ಗೊತ್ತಿದ್ದರೆ ಹೇಳೆ…
ಸುಳ್ಳೇ…?
ಈಗ ಕತ್ತಲಾದ ಮಾತ್ರಕ್ಕೆ
ಸೂರ್ಯ ಹುಟ್ಟಿದ್ದು ಸುಳ್ಳಾಗೋದೇ
ಮನಸು ಮುರಿದ ಮಾತ್ರಕ್ಕೆ
ಪ್ರೇಮಿಸಿದ ಹೃದಯ ಕಲ್ಲಾಗೋದೇ?

ಇವ್ರೆಲ್ಲಾ ಏನ್ ಹೇಳ್ತಾರೆ ಕೇಳಿ...