ಯಾಕೆ ಬೇಕಿತ್ತು ಇದೆಲ್ಲಾ…?

25 08 2008

ಯಾಕೆ ಬೇಕಿತ್ತು ಈ ಅವತಾರಗಳೆಲ್ಲಾ

ದುಷ್ಟರು-ದುರುಳರು ಹುಟ್ಟಿ ಬೆಳೆದು,

ಅಮಾಯಕ ಜನಗಳ ಮೆಟ್ಟಿ ತುಳಿದು,

ಅಟ್ಟಹಾಸಗೈದು ಮೆರೆದಾಡಿದ ಮೇಲೆ

 

ಅವತಾರಗಳ ಹೆಸರಲಿ ಜನ್ಮಪಡೆದು,

ಅದೆಷ್ಟೋ ಕಾಲಗಳ ತನಕ ತಡೆದು,

ದುಷ್ಟರೊಡನೆ ಕಾದಾಟವು ನಡೆದು

ಯುದ್ಧದಲಿ ಅಮಾಯಕರ ನೆತ್ತರು ಹರಿದು

 

ಬೇಕಿತ್ತೆ ಈ ಅವತಾರಗಳ ರಗಳೆಯೆಲ್ಲಾ..?

ಸರ್ವಶಕ್ತ ಅವನು ಅನ್ನುವರಲ್ಲ

ದುಷ್ಟರೇ ಹುಟ್ಟದಂತೆ ಮಾಡಿಬಿಡಬಹುದಲ್ಲ

ಆಗ ಕಾಯುವ ಕೊಲ್ಲುವ ರಗಳೆಯೇ ಇಲ್ಲ.

 

ಹಾಗೆನಾದರೂ ಆದರೆ ಅವನ ನೆನೆಯುವವರೇ ಇಲ್ಲವಾಗಿ

ಭಗವಂತನ ಕುರಿತು ಜನಕೆ ಆದರ ಕಮ್ಮಿಯಾಗಿ

ಅವನ ಅಸ್ತಿತ್ವ ಜಗದಿಂದಲೇ ಅಳಿದುಹೋಗಿ

ಬಿಡುವ ಅಪಾಯದ ಕುರಿತಾದ ಭೀತಿಯೇ?

ಅಬ್ಬಾ!.. ದೇವರೂ ಕೂಡಾ ಇಷ್ಟು ಸ್ವಾರ್ಥಿಯೇ?

 

( ಪ್ರೇರಣೆ: ಕಾರಂತರ ಮೂಕಜ್ಜಿಯು ಆಡುವ ದೇವರ ಅವತಾರಗಳ ಬಗೆಗಿನ ಮಾತುಗಳು)

 

 

 

 


Actions

Information

2 responses

26 08 2008
vimalanavada

nanagu haage annisutte.

27 08 2008
vijayraj

ವಿಮಲ ಅವರೆ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ.

ಧಾಕಲೆಯ ಬಗ್ಗೆ ವ್ಯಾಖ್ಯಾನವನ್ನು ಬರೆಯಿರಿ