ಯಡಿಯೂರಪ್ಪ ಬಣದ ಸದಾನಂದ ಗೌಡ್ರು ಮುಖ್ಯ ಮಂತ್ರಿ ಆದ ಖುಷಿಯಲ್ಲಿ ಮಾಜಿ ಸೀಎಂ ಸಾಹೇಬರು ಕವಿರತ್ನ ಕಾಳಿದಾಸನ ಗೆಟಪ್ಪಿನಲ್ಲಿ..
ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡನ್ನು ಹಿಂಗೆ ಹಾಡ್ತಿದ್ದಾರೆ…
ಕೆಳಗೆ ವೀಡಿಯೊ ಲಿಂಕ್ ಇದೆ ನೋಡಿ…ವೀಡಿಯೊ ನೋಡ್ತಾ ಈ ಹಾಡು ಕೇಳಿ…
ಖುಷಿ ಆದ್ರೆ ನಂಗೊಂದ್ ಮಾತು ಮರೀದೆ ಹೇಳಿ…..
ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ
ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ..
ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ
ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ..
ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ …||
ಬಣವೆರಡು ಕಮಲದಲಂತೆ…ಮಂತ್ರಿಯಾಗಲು ದೊಂಬಿಯಂತೆ ||೨||
ಶಾಸಕರು ಎಂಪಿಗಳಂತೆ… ಈ ಜಗಳ… ಹೂ-ಬಣ ಸಂತೆ ||೨||
ನೆಡೆಯುತಿದೆ ನಾಟಕದಂತೆ…… ನೆಡೆಯುತಿದೆ ನಾಟಕದಂತೆ ||೨||
ಪಾರ್ಟಿಯೇ ಧರೆಗಿಳಿದಂತೆ
ಈ ಹಂತದಿ… ಸೋಲೆನೂ ಸೋಲೇ ನಾನೂ
ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ…||
ಗವರ್ನಮೆಂಟು ಬೀಳದಂತೆ… ಭಿನ್ನರು ಮೇಲೇಳದಂತೆ
ಇರುವ ಹಳೆ ಕೇಸೆಲ್ಲಾ…ಎನ್-ಕ್ವಾಯರಿ… ಆಗದಿರದಂತೆ ||೨||
ಜೊತೆಯಾಗಿ ನೀವಿರಿ ಸಾಕು…. ಭೂ-ಲೂಟಿ ವರ್ಗದಂಧೆ..
ಈ ರಾಜ್ಯವ…ನುಂಗುವೆ…ನುಂಗ್ವೇ..ನಾನು.
ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ
ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ..
ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ …||
——————————————————————-
ಮೂಲ ಕವಿರತ್ನ ಕಾಳಿದಾಸ… (ಕೃಪೆ: ಕನ್ನಡ ಲಿರಿಕ್ಸ್.ಕಾಂ )
ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನಾ ಬಯಕೆ ತುಂಬುವೇ
ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನಾ ಬಯಕೆ ತುಂಬುವೇ
ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ
ಕಣ್ಣೆರಡು ಕಮಲಗಳಂತೆ ಮುಂಗುರುಳು ದುಂಬಿಗಳಂತೆ ||೨||
ನಾಸಿಕವು ಸಂಪಿಗೆಯಂತೆ ನೀ ನಗಲು ಹೂ ಬಿರಿದಂತೆ ||೨||
ನಡೆಯುತಿರೆ ನಾಟ್ಯದಂತೇ ನಡೆಯುತಿರೆ ನಾಟ್ಯದಂತೇ ||೨||
ರತಿಯೇ ಧರೆಗಿಳಿದಂತೆ
ಈ ಅಂದಕೆ ಸೋತೆನು ಸೋತೆ ನಾನೂ
ಸದಾ ಕಣ್ಣಲ್ಲೇ ಪ್ರಣಯದಾ ಕವಿತೆ ಹಾಡುವೆ
ಗುಡುಗುಗಳು ತಾಳದಂತೇ ಮಿಂಚುಗಳು ಮೇಳದಂತೆ
ಸುರಿವಾ ಮಳೆ ನೀರೆಲ್ಲಾ ಪನ್ನೀರ ಹನಿಹನಿಯಂತೇ ||೨||
ಜೊತೆಯಾಗಿ ನೀನಿರೆ ಸಾಕು ಭೂಲೋಕ ಸ್ವರ್ಗದಂತೆ
ಈ ಪ್ರೇಮಕೆ ಸೋತೆನು ಸೋತೆ ನಾನೂ
ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲೀ ಒಲವಿನಾ ಬಯಕೆ ತುಂಬುವೇ
ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೇ…

nice.. ಲಾಯ್ಕಿತ್
ಹ್ವಾಯ್ ಲಾಯ್ಕಿತ್ ಮರಾಯರೇ
ನಮ್ಸ್ಕಾರ
adbhuta !!!
adbhuta parikalpane……sundara vidambane.
SOOPER REMIX…..VERY NICE VIJAY SIR,
very good and nearest song for yeddi
ಚೆನ್ನಾಗಿದೆ! ರಾಜಕೀಯ ಡೊಂಬರಾಟ:)
Nice song.. good