ಬಿರು ಬೇಸಿಗೆಯಲ್ಲಿ ಸಂಜೆ ಮಳೆಯ ಹಾಗಿನದೊಂದು ತಂಪು ಸುದ್ದಿ….!!

23 04 2009

ಕಲಾಕ್ಷೇತ್ರಕ್ಕೆ ಈ ಭಾನುವಾರ (ಏಪ್ರಿಲ್ 24) ತಪ್ಪದೆ ಬರ್ತೀರಿ ಅಲ್ವಾ?

ನೆಪ ಹೇಳದೆ ಬಂದ್ಬಿಡಿ… ಅಷ್ಟೆ!!book-1
ಯಾಕಂದ್ರೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಮಣಿಕಾಂತ್ ಬರೆದ ಮುದ್ದಾದ ಪುಸ್ತಕವೊಂದು ಆವತ್ತು ಬಿಡುಗಡೆಯಾಗಲಿದೆ…
ಪುಸ್ತಕದಷ್ಟೇ ಮುದ್ದಾದ ಹೆಸರೊಂದನ್ನು ಮಣಿ ತಮ್ಮ ಪುಸ್ತಕಕ್ಕೆ ಕೊಟ್ಟಿದ್ದಾರೆ…”ಅಮ್ಮ ಹೇಳಿದ 8 ಸುಳ್ಳುಗಳು…”

ಆವತ್ತು ಪ್ರಕಾಶ್ ರೈ, ರವಿ ಬೆಳಗೆರೆ, ಕೃಷ್ಣೇಗೌಡ್ರು ಎಲ್ಲಾ ಬರ್ತಾರೆ…
ಜೊತೆಗೆ ಉಪಾಸನ ತಂಡದ ಇಂಪಾದ ಗಾಯನ ಕೂಡಾ ಇದೆ…

ತಪ್ಪದೆ ಎಲ್ಲರೂ ಬನ್ನಿ…  ನಿಮ್ಮ ಸ್ನೇಹಿತರಿಗೊ ಹೇಳಿ ಅವರನ್ನೂ ಕರೆತನ್ನಿ





ಬ್ಲಾಗಿಗೆ ವರುಷ ತುಂಬಿದ್ದಷ್ಟೇ ಸಾಧನೆ….!!!

25 03 2009

ಅಂತೂ ಇಂತೂ ಕುಂಟುತ್ತಾ, ಎಡವುತ್ತಾ ಬ್ಲಾಗಿಗೆ ನಿನ್ನೆ ಒಂದು ವರ್ಷ ತುಂಬಿತು. ಒಂದು ವರ್ಷದಲ್ಲಿ ಸಾಧಿಸಿದ್ದೇನು ಅಂತ ಲೆಕ್ಕ ಹಾಕೋಕೆ ಹೋದ್ರೆ ವರ್ಷ ತುಂಬಿದ್ದು ಬಿಟ್ರೆ ಬೇರೆ ಎಂತದೂ ಕಾಣ್ತಾ ಇಲ್ಲ. ಕಡಿದು ಕಟ್ಟೆ ಹಾಕಿದ್ದು ಏನೇನೂ ಇಲ್ಲ. ಇನ್ನೂ ಅಂಬೆಗಾಲಿಕ್ಕುತಾ ಈಗಷ್ಟೇ ನಡೆಯಲು ಕಲಿಯುತ್ತಿರುವ ನನ್ನಂತವನನ್ನೂ ಈ ಬ್ಲಾಗ್ ಲೋಕ ಹರಸಿದೆ. ಆದರೂ ಎಲ್ಲಕ್ಕಿಂತ ಹೆಚ್ಚಿನ ಖುಷಿಯ ಸಂಗತಿಯೆಂದರೆ ಅನೇಕರ ಪರಿಚಯ ಮಾಡಿ ಕೊಟ್ಟಿದೆ ಈ ಬ್ಲಾಗ್ ಲೋಕ. ಕೆಲವೊಮ್ಮೆ ಬರೆದ ಬರಹಗಳು ನನಗೆ ತೃಪ್ತಿ ನೀಡಿದೆ. ನೀವು ಸುಳ್ಳು ಸುಳ್ಳೇ ಹೊಗಳಿದ್ದು ಕೇಳಿ ಹಿಗ್ಗಿ ಹೀರೆಕಾಯಿ ಆಗಿದ್ದೂ ಉಂಟು. 365 ದಿನಗಳ ಈ ಪಯಣದಲ್ಲಿ 140ಕ್ಕೂ ಹೆಚ್ಚು ಬರಹಗಳನ್ನು ನನ್ನಂತಹ ಪರಮ ಸೋಂಬೇರಿಯ ಕೈಲಿ ಬರೆಸಿದೆಯೆಂದ್ರೆ ಅದು ಬ್ಲಾಗಮ್ಮನ ಮಹಿಮೆಯೇ ಸರಿ. ಈಗ ಸ್ವಲ್ಪ ಕೆಲಸದ ಒತ್ತಡದ ಕಾರಣದಿಂದ ಪೋಸ್ಟ್ ಸಂಖ್ಯೆ ಸ್ವಲ್ಪ ಕಡಿಮೆ ಆಗಿದೆ… ಹಾಗಂತ ಬರೆಯೋ ಆಸಕ್ತಿ ಒಂದಿನಿತೂ ಕುಂದಿಲ್ಲ ಅನ್ನೋದನ್ನು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಬರೆದು ಸಾಬೀತು ಪಡಿಸುವ ‘ಭೀಕರ’ ಕ್ರಮದ ಮೂಲಕ ನಿಮ್ಮ ಮೇಲೆ ಮುರಿದುಕೊಂಡು ಬೀಳಲಿದ್ದೇನೆ. ನಿಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ. ಅದು ನನ್ನ ತೊದಲು ನುಡಿಯಂತಹ ಬರವಣಿಗೆಗೆ ಒಂದು ಸ್ಪಷ್ಟ ರೂಪ ಕೊಡುವಂತಹ ಸಲಹೆಯಾಗಿರಲಿ ಅನ್ನೋದು ನನ್ನ ಕೋರಿಕೆ. ಹಾಗಾಗಿ ನಿರ್ಭಿಡೆಯಿಂದ ನಿಮ್ಮ ಅಭಿಪ್ರಾಯ ತಿಳಿಸಿ. ಒಂದೆರಡು ಸಾಲು ಗೀಚಿದರೆ ನಾನು ಧನ್ಯ…ಸಧ್ಯಕ್ಕೆ ಇಷ್ಟು ಸಾಕು. ಮತ್ತೊಮ್ಮೆ ಹೊಸ ಬರಹದೊಂದಿಗೆ ಶೀಘ್ರವೇ ನಿಮ್ಮ ಮುಂದಕ್ಕೆ ಬರಲಿದ್ದೇನೆ… ಹಾಗಾಗಲಿ ಅಂತ ಹಾರೈಸುತ್ತೀರಲ್ಲಾ?





ಸ್ವರ ರಿಂಗಣವನ್ನು ಕೇಳಿಸಿಕೊಳ್ಳಿ…

9 02 2009

ನಮ್ಮ ಊರಿನ ಹುಡುಗ ಪವನ್ ಒಂದು ಬ್ಲಾಗ್ ಶುರು ಮಾಡಿದ್ದಾನೆ… ನಮ್ಮ  ಊರಿನವ ಅಂತ ಹೇಳೋದಲ್ಲ… ಇವನು ತುಂಬಾ ಚೆನ್ನಾಗಿ ಬರೆಯಬಲ್ಲೆ ಅನ್ನುವ ಸೂಚನೆಯನ್ನು ತಾನು ಬರೆದ ಕೆಲವು ಪುಟ್ಟ ಪುಟ್ಟ ಲೇಖನಗಳಲ್ಲೇ ತೋರ್ಸಿದ್ದಾನೆ… ನೀವೂ ಒಂದ್ ಸಲ ಹೋಗಿ ಓದಿ ಅವನ ಬೆನ್ನು ತಟ್ಟಿದ್ರೆ… ಇನ್ನಷ್ಟು ಹುರುಪಿಂದ ಮತ್ತಷ್ಟು ಚೆಂದವಾಗಿ ಬರೆದಾನು… ಹೋಗಿ ನೋಡಿ ಸ್ವ ರಿಂಗಣವನ್ನು ಕೇಳಿಸಿಕೊಳ್ಳಿ