Posts Tagged ‘kannada’

ಮೊನ್ನೆ ಪತ್ರಿಕೆಯಲ್ಲಿ ಒಂದು ಸುದ್ದಿ ಇತ್ತು. ಯಾರೋ ಕಿಡಿಗೇಡಿಗಳು ರಾಜ್ ಕುಮಾರ್ ಪ್ರತಿಮೆಯನ್ನು ಭಗ್ನಗೊಳಿಸೋಕೆ ಯತ್ನಿಸಿದರು ಅಂತ. ಈ ಕೃತ್ಯದಿಂದ ಅಸಲು ಯಾರಿಗೆ ಏನು ಲಾಭ ಸಿಕ್ಕಿತೋ ಗೊತ್ತಿಲ್ಲ. ಯಾವುದೋ ಅನಾರೋಗ್ಯಕರ ಮನಸ್ಸಿನ ವಿಕೃತಾನಂದಕ್ಕಾಗೇ ನಡೆಸುವ ಇಂತಹ ಕ್ಷುಲ್ಲಕ ಕೆಲಸಗಳಿಂದ ರಾಜ್ ಕುಮಾರ್ ಅವರಂತಹ ಮಹಾನ್ ಚೇತನಕ್ಕೆ , ಅವರ ವ್ಯಕ್ತಿತ್ವದ ಘನತೆಗೆ ಮಸಿಬಳಿಯಲೆತ್ನಿಸುತ್ತೇವೆ ಅನ್ನುವ ಅವರ ಬಾಲಿಶ ತರ್ಕಕ್ಕೆ ಪಕ್ಕೆ ಹಿಡಿದು ನಗುವಂತಾಗುತ್ತದೆ.   ಕನ್ನಡದ ಪಾಲಿಗೆ ಡಾ| ರಾಜ್ ಒಂದು ಚೈತನ್ಯದ ಚಿಲುಮೆಯಂತಿದ್ದರು. ಅಪರೂಪದ [...]

ಕುಂದಾಪ್ರ ಕನ್ನಡದಗೆ ಒಂದು ಬ್ಲಾಗ್ ಮಾಡ್ಕ್ ಮಾಡ್ಕ್ ಅಂದೇಳಿ ಸುಮಾರ್ ದಿವ್ಸದಿಂದ ಎಣ್ಸಕಂಡಿದ್ದೆ. ಅದನ್ನ್ ಇವತ್ ಶುರು ಮಾಡಿದೆ…ಒಂದ್ಸಲ ಕಾಣಿ ಬನ್ನಿ http://kundaaprakannada.wordpress.com

ಮಲೆನಾಡು ಅಂದಾಕ್ಷಣ ಮನಸು ಗೊತ್ತಿಲ್ಲದಂತೆ ಅರಳಿ ನಿಲ್ಲುತ್ತೆ. ನಾಸ್ಟಾಲ್ಜಿಯಾನೋ, ಪ್ರಕೃತಿಯ ಮಡಿಲಿನ ಆಹ್ಲಾದದ ನೆನಪೋ, ಇಲ್ಲಾ ಎಲ್ಲರಿಗೂ ಇರುವಂತೆ ನಮ್ಮ ನಮ್ಮ ಊರಿನ ಕುರಿತು ಇರುವ ವಿಚಿತ್ರ ವಿಶಿಷ್ಟ ಎಳೆತ ಸೆಳೆತಗಳೋ…ಒಟ್ಟಿನಲ್ಲಿ ಮಲೆನಾಡು ಶಬ್ದ ಕಿವಿ ತಮ್ಮಟೆಯ ಮೇಲೆ ಜೇನು ಸುರಿದಂತಾ ಅನುಭವ ಕೊಡೋದು ಸುಳ್ಳಲ್ಲ. ನಾ ಏನೇ ವರ್ಣಿಸಿದರೂ ಆ ಅನುಭೂತಿ ಎಲ್ಲ ಉಪಮೆ, ಸಾಮತಿ, ದೃಷ್ಟಾಂತಗಳ ಎಲ್ಲೆ ಮೀರಿದ್ದೆನ್ನುವುದಂತೂ ಸತ್ಯ. ಇಂತಹ ಮನಸಿನ ಕೈಗೇನಾದ್ರೂ ಕುವೆಂಪು ಕಾದಂಬರಿಗಳು ಸಿಕ್ಕಿದ್ರೆ ಹಬ್ಬದ ಹೋಳಿಗೆ-ತುಪ್ಪ ಇದರ ಮುಂದೆ [...]

  ಮೊನ್ನೆ ಎಂದಿನಂತೆ ನನ್ನ ಅಚ್ಚುಮೆಚ್ಚಿನ ಪುಸ್ತಕ ಮಳಿಗೆಗೆ ಗಾಂಧಿಬಜಾರಿನ ಅಂಕಿತ ಪುಸ್ತಕ ಮಳಿಗೆಗೆ ಹೋಗಿದ್ದೆ – ವಾರಾಂತ್ಯದ ಖರ್ಚಿಗೆ ಏನಾದ್ರೂ ಬೇಕಲ್ಲ ಓದೋಕೆ ಅಂತ. ಹೊಸ- ಹಳೆ ಪುಸ್ತಕಗಳ ಮೇಲೆಲ್ಲ ಒಂದ್ಸಲ ಕಣ್ಣುಹಾಯಿಸಿ ೨-೩ ಪುಸ್ತಕವನ್ನು ಪ್ರೀತಿಯಿಂದ ಕೈಗೆತ್ತಿಕೊಂಡೆ. ಪುಸ್ತಕದ ಹಣ ಕೊಟ್ಟು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಪ್ರಕಾಶ್ ಕಂಬತ್ತಳ್ಳಿ ಅವ್ರು ಕೇಳಿದ್ರು… ತೇಜಸ್ವಿಯವರ ಹೊಸ ಪುಸ್ತಕ ಬಂದಿದೆ ನೋಡಲಿಲ್ವ? ಅರೆ ಏನು ಹೇಳ್ತಾ ಇದ್ದಾರೆ ಇವ್ರು ಅಂಬಂತೆ ಇಡೀ ಮುಖವನ್ನೇ ಪ್ರಶ್ನೆ ಮಾಡಿಕೊಂಡು ನಿಂತೆ. ಅವ್ರು [...]

  ಅವನೊಬ್ಬ ಅನಿವಾಸಿ ಅವಳ್ಹೆಸರು ಅವಿನಾಶಿ ಭೇಟಿಯಾದರು ಅಂತರ್ಜಾಲದಿ ಚಾಟಿಸಿ ಅರಳಿದ ಪ್ರೇಮವು ಶುದ್ಧ ಫ್ಯಾಂಟಸಿ ಅಂತರ್ಜಾಲದ ಅಂತರ್‌ಪಟವ ಸೇರಿಸಿ ದಂಪತಿ ಅವರೀಗ ‘ನೆಟ್’ ಅಲ್ಲೇ ವರಿಸಿ ಬಂಧುಗಳು ಇವರ ‘ಮೇಲ್’ ಅಲ್ಲೇ ಹರಸಿ ವೆಬಕ್ಯಾಮ್‌ನೊಳಗೆ ಕಣ್ಣೀರು ಸುರಿಸಿ ಮನೆತುಂಬಿಸಿಕೊಂಡರು ಮೌಸ್ ಕ್ಲಿಕ್ಕಿಸಿ ತಾಳಿ (ಟ್ಯಾಲಿ) ಇಲ್ಲದ ಇ-ಮದುವೆ ಕತೆ ಆಲಿಸಿ ನಿಮ್ಮ ಅನಿಸಿಕೆಗಳನು ‘ಬ್ಲಾಗ್’ ಅಲ್ಲಿ ಬ್ಲಾಗಿಸಿ